Monday, January 17, 2011

ಜ್ಞಾನ-ವಿಜ್ಞಾನ

ಕಿವುಡರಲ್ಲಿ ಮೂಡಿತು ಆಶಾಭಾವನೆ.....!?

-ಸುಭಾಸ್ ಧೂಪದಹೊಂಡ
ನಮಗೆ ಕಿವಿ ಇಲ್ಲದಿದ್ರೆ ಏನಾಗ್ತಿತ್ತು. ಒಂದು ಕ್ಷಣ ಯೋಚಿಸಿ.. ಈ ಜಗತ್ತಿನಲ್ಲಿ ಮಾನವರ ಸಂವಹನ ಇಷ್ಟು ಬೆಳೆಯಲು ಸಾಧ್ಯವೇ ಇರಲಿಲ್ಲ ಅಲ್ವಾ...? ನಿಮ್ಮ ಕಲ್ಪನೆ ತಪ್ಪು. ಯಾಕೆಂದ್ರೆ ಮಾನವ ಕಿವಿ ಇಲ್ಲದೆನೂ ಕೇಳಬಹುದು.!!!

ಹೌದು ಈ ವಿಷಯ ತೀರ ಇತ್ತೀಚೆಗೆ ಸಾಭೀತಾಗಿದೆ. ಈ ಸಂಶೋಧನೆಯನ್ನ  ಅಮೆರಿಕಾ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಆದರೆ ಅದಲ್ಲ ವಿಶೇಷ. ಈ ವಿಷಯವನ್ನು ಆಧರಿಸಿ ಮಂಗಳೂರು ಮೂಲದ ವಿಜ್ಞಾನಿ ನಾರಾಯಣ ಕರ್ಕೆರಾ ಎಂಬುವವರು ಕಿವುಡರಿಗೆ ಅನುಕೂಲವಾಗಬಲ್ಲ ಒಂದು ಯಂತ್ರ ಕಂಡುಹಿಡಿದಿದ್ದಾರೆ.

ಇತರ ಪ್ರಾಣಿಗಳಂತೆ ಮಾನವನ ಚರ್ಮ ಸಹ ಸಂವಹನವನ್ನ ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಆದರೆ ಅದನ್ನ ಸೂಕ್ಷ್ಮವಾಗಿ ಬಳಸದ ಕಾರಣ ಸಂವಹನದ ಮೂಲಕ ನಮ್ಮ ಮೆದುಳಿಗೆ ಸಂಜ್ಞೆ ಮುಟ್ಟಿಸುವ ಚರ್ಮದ ಇನ್ನೊಂದು ಕಾರ್ಯ ಮಾನವನ ವಿಕಾಸದ ಹಂತದಲ್ಲಿ ನಿಷ್ಕ್ರಿಯವಾಗಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ.
 ನಮ್ಮ ಮೆದುಳಿನಲ್ಲಿ ಶಬ್ದವನ್ನ ಗ್ರಹಿಸುವ ಮತ್ತು ಅರ್ಥೈಸುವ ವಿಭಾಗಕ್ಕೆ ನರಗಳ ಸಹಾಯದಿಂದ ಸುದ್ದಿ ಮುಟ್ಟಿಸುವುದು ಕಿವಿಯ ಕೆಲಸ. ನಮ್ಮ ಸುತ್ತ ಉತ್ಪತ್ತಿಯಾಗುವ ಶಬ್ದಗಳು ನಮ್ಮ ಕರ್ಣಪಟಲಕ್ಕೆ ಹೋಗಿ ಬಡಿಯುತ್ತದೆ. ಕಣ್ಣ ಪಟಲದಲ್ಲಿ ಉಂಟಾದ ಕಂಪನ ನರಗಳ ಮೂಲಕ ಮಿದುಳಿಗೆ ರವಾನೆಯಾಗಿ ಅಲ್ಲಿ ಶಬ್ದದ ಗ್ರಹಿಕೆಯಾಗುತ್ತದೆ.
ಈ ಕಿವಿಯಲ್ಲಿರುವ  ಪಟಲ ಅಥವಾ ಮಿದುಳಿನೊಂದಿಗೆ ಸಂಪರ್ಕ ಕಲ್ಪಿಸುವ ನರಗಳ ದೌರ್ಬಲ್ಯದಿಂದ ಕೆಲವರಿಗೆ ಕಿವಿ ಕೇಳಿಸದು. ಆದರೆ ಇನ್ನ ಕಿವುಡುತನ ಸಮಸ್ಯೆ ತಪ್ಪಲಿದೆ.
ಚರ್ಮದ ಮೂಲಕ ನಮ್ಮ ಸುತ್ತ ಉಂಟಾಗುವ ಕಂಪನವನ್ನು ನಾವು ಗ್ರಹಿಸಿ ಶಬ್ದಗಳನ್ನುಕೇಳಬಹುದು. ಈ ಹೊಸ ಸಂಶೋಧನೆಯಿಂದ ಸಂಪರ್ಕ ತಂತ್ರಜ್ಞಾನದಲ್ಲಿ  ಭಾರೀ ಬದಲಾವಣೆ ಆಗಲಿದೆ.

ನಮ್ಮವರ ಸಾಧನೆ
ಈ ತಂತ್ರಜ್ಞಾನ ಆಧರಿಸಿ ಮಂಗಳೂರು ಮೂಲದ ಅಣು ವಿಜ್ಞಾನಿ ನಾರಾಯಣ ಕರ್ಕೆರಾ ಆಶಾ ಬಾಡಿ ಪೋನ್ ಎಂಬ ಹೊಸ ಚಿಕ್ಕ ಯಂತ್ರವೊಂದನ್ನ ಕಂಡುಹಿಡಿದಿದ್ದಾರೆ. ಇದ್ನ ನಿಮ್ಮ ದೇಹದ ಯಾವುದೇ ಭಾಗದ ಚರ್ಮಕ್ಕೆ ತಾಗಿಸಿ ಹಿಡಿದರೆ ನೀವು ಕಿವಿಯಲ್ಲಿ ಕೇಳುವುದಕ್ಕಿಂತ ಸ್ಪಷ್ಟವಾಗಿ ಕೇಳಬಲ್ಲಿರಿ. ಈ ಸಾಧನ ಕಿವುಡರಿಗೆ ಆಶಾಕಿರಣವಾಗಿದೆ.


ಮುಂಬೈನ ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್ ನಲ್ಲಿ ಅಣುವಿಜ್ಞಾನಿಯಾಗಿ ಸೇವೆ ಸಲ್ಲಿಸಿದ ನಾರಾಯಣ ಕರ್ಕೆರಾ ಈಗ ಮಣಿಪಾಲ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸ ಯಂತ್ರಕ್ಕೆ ಪೇಟೆಂಟ್ ಸಹ ಪಡೆಯಲು ನಿರ್ಧರಿಸಿದ್ದಾರೆ. ಈ ಸಾಧನವನ್ನು ಸಧ್ಯ ಅಗತ್ಯವಿದ್ದವರಿಗೆ 15 ರಿಂದ 20 ಸಾವಿರಕ್ಕೆ ಮಾಡಿಕೊಡುತ್ತಿದ್ದಾರೆ. ಇದು ಕಿವುಡರಿಗೆ ಆಶಾಕಿರಣವಾಬೇಕಿದ್ದರೆ ಸರ್ಕಾರ ಪ್ರೋತ್ಸಾಹ ನೀಡ್ಬೇಕು. ಕಂಪೆನಿಗಳು ಹಣಕಾಸಿನ ನೆರವು ಕೊಡ್ಬೇಕು ಅನ್ನೋದು ನಾರಾಯಣ ಕರ್ಕೆರಾ ಅವರ ಮನವಿ. ಮನವಿಗೆ ಸ್ಪಂದನೆ ಸಿಗುತ್ತಾ ?